Tuesday, October 8, 2013

ದೇಶದ ಬೆನ್ನೆಲುಬು ರೈತ...



ನಮ್ಮ ದೇಶದ ಬೆನ್ನೆಲುಬು ರೈತ
ಹೀಗೆ ಸವೆಯುತ್ತಲೇ ಹೋದ ದುಡಿದು ಅನವರತ.

ಮುಂಜಾನೆಯಿಂದಲೇ ಹೊಲ ಹಸನು ಮಾಡಿ,
ಬಿತ್ತಿದ, ತಂದ ಕಳಪೆ ಬೀಜ ಕಾಡಿಬೇಡಿ,
ದಿನಗಳು ಕಳೆದರೂ ಹೊಲದಲಿ ಹಸಿರು ಕಾಣಲಿಲ್ಲ.
ಕೋಪದಲಿ, ಮಳೆರಾಯನಿಗೆ ಶಪಿಸುವುದು ತಪ್ಪಲಿಲ್ಲ.

ಇತ್ತ ಹೆಚ್ಚಾಗುತಲಿತ್ತು ದಿನೆದಿನೇ, 
ಸಾಲ ಕೊಟ್ಟ ಗೌಡನ ಕಿರಿಕಿರಿ ರೋಧನೆ,
ಓಟು ಹಾಕ್ಸಿಕೊಂಡ ಸರ್ಕಾರವೋ, 
ನೀಡುತ್ತಲಿದೇ ಬರೀ ಆಶ್ವಾಸನೆ,
ಯಾವುದಾದರೂ ಸರ್ಕಾರಿ ಸೌಲಭ್ಯ 
ಪಡೆಯೋಣವೆಂದರೆ, ಮಧ್ಯವರ್ತಿಯದೇ ದರ್ಬಾರು.
ಕೊನೆಗೂ ಕೈಸೇರಿತು ಹಸಿದ ನಾಯಿಗೆ ,
ಸಿಕ್ಕಂತೆ ಉಳಿದ ಚೂರುಪಾರು.

ಅವನ ಬದುಕಂತೂ ಆಗುತಿದೆ, ಚಿಂದಿಚಿಂದಿ,
ಅವನುಟ್ಟ, ಮಾಸಿದ ತ್ಯಾಪೆ ಅಂಗಿಯಂತೆ
ಬಿಸಿಲು-ಧೂಳು ಕೂತ ಟವೆಲ್ ಕೊಡವಿ ಮೇಲೆದ್ದು,
ಮನೆಗೆ ಹೊರಟ ಬಡಕಲು ಯೋಗಿಯಂತೆ. 

ಗಂಜಿಕಾಣದ ಹೊಟ್ಟೆಗೆ ತಣ್ಣೀರು ಬಟ್ಟೆ,
ದುಸ್ಥಿತಿಗೆ ನೊಂದು ಸಣಕಲಾಗುತ್ತಲೇ ಹೋದ. 
ಆ ದಿನ ಸಂಜೆ, ಮುಂಗಾರಿನ ಮಳೆ ಸುರಿವ ಮುನ್ನ,
ಬಡಿದ ಸಿಡಿಲಿಗೆ ಸಿಕ್ಕಿ.. ಪಾಪ..!! ಸತ್ತೇಹೋದ..!!!


No comments:

Post a Comment