Friday, April 5, 2013

ಬಾರಯ್ಯ ಭಾಸ್ಕರ



ಬಾರಯ್ಯ ಭಾಸ್ಕರ
ಜಗ ಬೆಳಗೊ ದಿನಕರ
ಇರುಳಿನ ತಂಪಿನಲಿ ಬೆಚ್ಚಗೆ
ಮಲಗಿದ್ದ ಜಡತೆಯನು
ಒಡೆದೋಡಿಸು ಬಾರೋ,
ಕತ್ತಲ ಸರಿಸಿ, ಬೆಳಕನು ಹರಿಸಿ,
ನಿನ್ನೆ ಮೊನ್ನೆಯ ನೋವನು
ನೀ ಮರೆಸು ಬಾರೋ
ಕೆಂಪಾದ ನಿನ್ನ ಹೊಂಗಿರಣದಿಂದ
ನರನಾಡಿಯಲ್ಲಿ ಹೊಸಚೈತನ್ಯ ತಾರೋ

ಸಂಜೆಯಾಗುವವರೆಗೂ
ಈ ಉತ್ಸಾಹ ಬತ್ತದಿರಲಿ.
ನನ್ನ ಬೆವರ ಹರಿಸಿ,
ಮಾಡಿದ ದುಡಿಮೆಯಲಿ,
ಈ ಚೈತನ್ಯ ನಲುಗದಿರಲಿ.
ನಾಳಿನ ನಿನ್ನ ದರುಷನಕೆ,
ಕಾದಿವೇ ಈ ಕಣ್ಣುಗಳು.
ಆ ಕನಸಿನಲೇ ನಾ
ಕಳೆಯುತಿರುವೆ ಇರುಳು.
ಬಾರಯ್ಯ ಭಾಸ್ಕರ
ದಿನ ಬೆಳಗೋ ದಿನಕರ